ಸುರತ್ಕಲ್: ಕೊರೋನಾ ಮಧ್ಯೆ ಬಿಂದಾಸ್ ಹೆದ್ದಾರಿ ವೇಶ್ಯಾವಾಟಿಕೆ! ಮಂಗಳಮುಖಿಯರ ಸೆಕ್ಸ್ ದಂಧೆ!!

ಮಂಗಳೂರು: ಕೊರೋನಾ ಮಹಾಮಾರಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದರೂ ಇಲ್ಲಿ ಮಾತ್ರ ಹೆದ್ದಾರಿ ವೇಶ್ಯಾವಾಟಿಕೆ ಬಿಂದಾಸ್ ಆಗಿ ನಡೀತಿದೆ. ಹೆಸರಾಂತ ಎನ್‍ಐಟಿಕೆ ಶಿಕ್ಷಣ ಸಂಸ್ಥೆ, ಬೀಚ್ ಪ್ರವಾಸೋದ್ಯಮ, ಪ್ರಸಿದ್ಧ ದೇವಸ್ಥಾನಗಳನ್ನು ಹೊಂದಿರುವ ಸುರತ್ಕಲ್‍ಗೆ ಅಂಟಿಕೊಂಡಿರುವ ಶಾಪವೆಂದರೆ ಮಂಗಳಮುಖಿಯರ ವೇಶ್ಯಾವಾಟಿಕೆ. ಈ ಹಿಂದೆ ಇಲ್ಲಿನ ಕಾನ, ಪಣಂಬೂರು, ಬೈಕಂಪಾಡಿಗಷ್ಟೇ ಸೀಮಿತವಾಗಿದ್ದ ಇವರು ಕಳೆದ ಏಳೆಂಟು ತಿಂಗಳಿಂದ ಮುಕ್ಕ, ಎನ್‍ಐಟಿಕೆ ಟೋಲ್ ಗೇಟ್ ಪರಿಸರದಲ್ಲಿ ಬೀಡುಬಿಟ್ಟಿದ್ದಾರೆ. ಇಲ್ಲಿ ಟೋಲ್ ಪಾವತಿಸಲು ನಿಲ್ಲುವ ವಾಹನ ಸವಾರರಿಂದ ಹಣಕ್ಕಾಗಿ ಪೀಡಿಸುವುದು ಒಂದೆಡೆಯಾದರೆ ಸಂಜೆಯಾಗುತ್ತಲೇ ಇಲ್ಲಿ ವಿಟಪುರುಷರಿಗಾಗಿ ಕಾಯುತ್ತಾ ಹೆದ್ದಾರಿ ಪಕ್ಕವೇ ಖುಲ್ಲಂಖುಲ್ಲಾ ರತಿಕ್ರೀಡೆಯಾಡುತ್ತಿರುವುದು ವಾಹನ ಸವಾರರು, ವಿದ್ಯಾರ್ಥಿಗಳಿಗೆ ತೀರಾ ಮುಜುಗರ ಉಂಟು ಮಾಡುತ್ತಿದೆ. ಈ ಬಗ್ಗೆ ಕ್ರಮ ಜರುಗಿಸಬೇಕಾದ ಸುರತ್ಕಲ್ ಠಾಣಾ ಪೊಲೀಸರು ಎಲ್ಲಾ ಗೊತ್ತಿದ್ದೂ ಸುಮ್ಮನಿರುವುದೇಕೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಕೊರೊನಾ ಆತಂಕದ ಮಧ್ಯೆ ಹೊರರಾಜ್ಯದ ಲಾರಿ ಚಾಲಕರು ಇಲ್ಲಿ ವಾಹನ ನಿಲ್ಲಿಸಿ ಬೆವರಿಳಿಸಿಕೊಳ್ಳುತ್ತಿರುವುದು ಮುಂದೊಂದು ದಿನ ಎನ್ ಐಟಿಕೆ ಕೊರೋನಾ ಹಾಟ್ ಸ್ಪಾಟ್ ಆದರೂ ಅಚ್ಚರಿ ಪಡಬೇಕಿಲ್ಲ.
ಎನ್‍ಐಟಿಕೆ ಟೋಲ್ ಗೇಟ್ ಗಿಂತ ಕೆಲವೇ ಮೀಟರ್ ದೂರ ಉಡುಪಿ ಕಡೆಗೆ ಸಾಗುವ ಹೆದ್ದಾರಿ ಬದಿಯಲ್ಲಿ ಅರೆಬರೆ ಬಟ್ಟೆ ಧರಿಸಿ ನಿಲ್ಲುವ ಮಂಗಳಮುಖಿಯರು ಸಂಜೆಯಾಗುತ್ತಲೇ ವ್ಯವಹಾರಕ್ಕಿಳಿಯುತ್ತಾರೆ. ಇಬ್ಬರು ಪ್ರತಿನಿತ್ಯ ಇಲ್ಲಿ ನಿಲ್ಲುತ್ತಿದ್ದು 500, 1000 ರೂ. ಎಂದು ರಸ್ತೆಯಲ್ಲಿ ಹೋಗಿಬರುವ ವಾಹನ ಸವಾರರ ಗಮನ ಸೆಳೆದು ಅಲ್ಲೇ ವ್ಯವಹಾರ ಕುದುರಿಸುತ್ತಾರೆ. ಒಂದೊಮ್ಮೆ ವ್ಯವಹಾರ ಫಿಕ್ಸ್ ಆದರೆ ಅಲ್ಲೇ ಅರೆಬರೆ ಕತ್ತಲಿರುವ ಸಮೀಪದ ಎನ್‍ಐಟಿಕೆ ಸಂಸ್ಥೆಯ ಕಂಪೌಂಡ್ ಹೊರಗಡೆ, ಪಡ್ರೆ ದೈವಸ್ಥಾನ ದ್ವಾರ ಪಕ್ಕ ಹೆದ್ದಾರಿಯಲ್ಲಿ ಸಾಗುವವರಿಗೆ ಕಾಣಿಸುವ ಜಾಗದಲ್ಲೇ ಸೆಕ್ಸ್ ಮಾಡುತ್ತಾರೆ. ಪಾದಚಾರಿಗಳು, ವಾಹನ ಸವಾರರು ಇದನ್ನು ಕಂಡೂ ಕಾಣದಂತೆ ನಡೆಯಬೇಕಾದ ದುಸ್ಥಿತಿ ಒದಗಿ ಬಂದಿದೆ. ಇನ್ನು ಎನ್‍ಐಟಿಕೆ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು ಇಲ್ಲಿ ನಡೆದಾಡುವಂತಿಲ್ಲ, ನಿಲ್ಲುವಂತಿಲ್ಲ. ಯಾಕೆಂದರೆ ಅವರನ್ನೂ ವೇಶ್ಯೆಯರೆಂದು ಭಾವಿಸಿ ವಾಹನ ಸವಾರರು ಕರೆಯುವುದು ಮಾಮೂಲಾಗಿದೆ.
ಹೆದ್ದಾರಿಯ ಕೆಲವೇ ಮೀ. ದೂರದ ಕಂಪೌಂಡ್ ಹೊರಗಡೆಯೇ ನಿರ್ಲಜ್ಜ ರೀತಿಯಲ್ಲಿ ಸೆಕ್ಸ್ ದಂಧೆ ನಡೆಸ್ತಾ ಇರೋ ಇವರ ಬಗ್ಗೆ ಹತ್ತಿರದ ಠಾಣೆಯ ಪೊಲೀಸರಿಗೆ ತಿಳಿದಿಲ್ಲವೆಂದೇನಲ್ಲ. ಮಂಗಳಮುಖಿಯರು ನಿಂತಲ್ಲಿಯೇ ಸುರತ್ಕಲ್ ಠಾಣೆಯ ಬೀಟ್ ವಾಹನ ಹತ್ತಾರು ಬಾರಿ ಅತ್ತಿಂದಿತ್ತ ಸಂಚರಿಸುತ್ತದೆ. ಆದರೂ ಕೆಟ್ಟ ದಂಧೆಯನ್ನು ಯಾಕೆ ನಿಯಂತ್ರಿಸಿಲ್ಲ ಅನ್ನೋದು ಜನರ ಅನುಮಾನ. ತಡರಾತ್ರಿ 12 ಗಂಟೆ ಕಳೆದರೂ ಇಲ್ಲಿ ದಂಧೆ ನಿರತವಾಗಿರುವ ಇವರಿಂದಾಗಿ ಪಾದಚಾರಿಗಳು, ವಾಹನ ಸವಾರರು, ಕಾಲೇಜ್ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆ ಅಷ್ಟಿಷ್ಟಲ್ಲ. ಉಡುಪಿ ನೋಂದಣಿಯ ವಾಹನಗಳು, ಮೀನಿನ ಲಾರಿಗಳು, ಟ್ರಕ್‍ಗಳು ರಾತ್ರಿಯಾದಂತೆ ಇಲ್ಲಿ ರಾಶಿ ರಾಶಿ ನಿಲ್ಲುತ್ತಿದ್ದು ವಾಹನದೊಳಗಡೆಯೇ `ಕೆಲಸ’ ಪೂರೈಸಿ ಹೋಗುತ್ತಿದ್ದಾರೆ. ದಿನವೊಂದಕ್ಕೆ ಒಬ್ಬೊಬ್ಬರು ತಲಾ 10 ಸಾವಿರದಿಂದ 20 ಸಾವಿರ ರೂ. ಕಮಾಯಿ ಮಾಡುತ್ತಿದ್ದು ಇದರಲ್ಲಿ ಯಾರಿಗೆ ಎಷ್ಟು ಪಾಲಿದೆ ಎಂಬ ಪ್ರಶ್ನೆಗೆ ಪೊಲೀಸರೇ ಉತ್ತರಿಸಬೇಕಿದೆ. ವಿದ್ಯಾರ್ಥಿಗಳು, ಯುವಜನರನ್ನು ಕೆಟ್ಟದಾರಿಗೆ ಎಳೆಯುವ ಇಂಥ ದಂಧೆಯನ್ನು ಮಟ್ಟಹಾಕಲು ಕಮಿಷನರ್ ಅವರೇ ಗಮನಹರಿಸಬೇಕಾದ ಅಗತ್ಯವಂತೂ ಸದ್ಯಕ್ಕಿದೆ. ಇಲ್ಲವಾದರೆ ಎನ್‍ಐಟಿಕೆ ಟೋಲ್ ಗೇಟ್ ಪರಿಸರದಲ್ಲಿ ಮುಂದೊಂದು ದಿನ ದರೋಡೆ, ಕೊಲೆಯಂಥ ಗಂಭೀರ ಕೃತ್ಯಗಳು ನಡೆದರೂ ಅಚ್ಚರಿ ಪಡಬೇಕಿಲ್ಲ.

Leave a Reply

Your email address will not be published. Required fields are marked *