ಮೆಲ್ಕಾರ್ : ಬಂಧಿಸಲು ಹೋದ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ, ಜೀವ ಬೆದರಿಕೆ

ಬಂಟ್ವಾಳ: ಇಲ್ಲಿನ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಬಳಿ ಶುಕ್ರವಾರ ರಾತ್ರಿ ಸುಮಾರು 10 ಗಂಟೆಗೆ ಸ್ಥಳೀಯ ನಾಗರಿಕರೊಂದಿಗೆ ಘಷ೯ಣೆಗೆ ತೊಡಗಿದ್ದ ಆರೋಪಿಯನ್ನು ಬಂಧಿಸಲು ಹೋಗಿದ್ದ ಪೋಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಗೋಳ್ತಮಜಲು ನಿವಾಸಿ ಲಾರಿ ಚಾಲಕ ಅಬ್ದುಲ್ ಸಲಾಂ ಎಂಬಾತನು ಮೆಲ್ಕಾರ್ ಎಂಬಲ್ಲಿ ನಾಗರಿಕರೊಂದಿಗೆ ಘಷ೯ಣೆ ನಡೆಸುತ್ತಿರುವ ಬಗ್ಗೆ ಸುದ್ದಿ ತಿಳಿದು ಭೇಟಿ ನೀಜಿದ ಪೊಲೀಸರು ಆತನನ್ನು ತಡೆದು ಬಂಧಿಸಲು ಮುಂದಾಗಿದ್ದಾರೆ. ಈ ಸಂದಭ೯ದಲ್ಲಿ
ಆರೋಪಿಯು ಕಬ್ಬಿಣದ ರಾಡ್ ನಿಂದ ಏಕಾಯೇಕಿ ಪೊಲೀಸರ ಮೇಲೆ ಹಲ್ಲೆ ನಡೆಸಿ , ಪೋಲೀಸ್ ವಾಹನಕ್ಕೂ ಹಾನಿಗೊಳಿಸಿದ ಬಳಿಕ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.
ಗಾಯಾಳು ಎ.ಎಸೈ ಶೈಲೇಶ್ ಮತ್ತು ಸಿಬ್ಬಂದಿ ಗಳಾದ ದೇವಪ್ಪ , ಮಲ್ಲಕ್ ಸಾಬ್, ಹಾಗೂ ಜೀಪು ಚಾಲಕ ನಿರಂಜನ್ ಬಂಟ್ವಾಳ ಸಕಾ೯ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.