ಇಂದು ದ.ಕ. ಜಿಲ್ಲೆಯಲ್ಲಿ 200ರ ಗಡಿಯತ್ತ ಮಹಾಮಾರಿ ಕೊರೋನಾ!?

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಕಿಲ್ಲರ್ ಕೊರೋನಾ ವೇಗವಾಗಿ ಹರಡುತ್ತಿದ್ದು ಇಂದು 200ರ ಗಡಿಯತ್ತ ತೀರಾ ಸಮೀಪದಲ್ಲಿದೆ ಎಂದು ಮೂಲಗಳು ಹೇಳಿವೆ. ಬರೋಬ್ಬರಿ 192 ಕೇಸ್ ಗಳು ಕಳೆದ 24 ಗಂಟೆಗಳಲ್ಲಿ ವರದಿಯಾಗಿದ್ದು ಜಿಲ್ಲೆಯಲ್ಲಿ ಆತಂಕ ಮನೆಮಾಡಿದೆ. ನಿನ್ನೆ ಮಹಾಮಾರಿ 3 ಮಂದಿಯನ್ನು ಬಲಿ ಪಡೆದುಕೊಂಡಿದೆ.