ಬಂಟ್ವಾಳ ಅರಣ್ಯಾಧಿಕಾರಿಗಳ ಕಾರ್ಯಾಚರಣೆ: ಲಕ್ಷಾಂತರ ಬೆಲೆಬಾಳುವ ಮರದ ದಿಮ್ಮಿ ವಶ !

ಬಂಟ್ವಾಳ : ಕಡೇಶಿವಾಲಯ ಗ್ರಾಮದ ಬುಡೋಳಿ ಎಂಬಲ್ಲಿ ಅಕ್ರಮವಾಗಿ ಲಾರಿಗಳಲ್ಲಿ ಲಕ್ಷಾಂತರ ಮೌಲ್ಯದ ಮರದ ದಿಮ್ಮಿಗಳನ್ನು ಸಾಗಾಟ ಮಾಡುತಿದ್ದಾಗ ರಾತ್ರಿ ಗಸ್ತಿನಲ್ಲಿದ್ದ ಬಂಟ್ವಾಳ ಅರಣ್ಯ ಇಲಾಖಾ ಸಿಬ್ಬಂದಿ ಪತ್ತೆಹಚ್ಚಿ ಲಾರಿ ಹಾಗು ಮರದ ದಿಮ್ಮಿಗಳನ್ನು ವಶಪಡಿಸಿಕೊಂಡಿರುತ್ತಾರೆ .ಈ ಕಾರ್ಯಾಚರಣೆಯಲ್ಲಿ ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಾಳೆಗಾರ, ಉಪ ವಲಯ ಅರಣ್ಯಾಧಿಕಾರಿ ಪ್ರೀತಂ ಎಸ್ ,ಯಶೋಧರ , ಅರಣ್ಯ ರಕ್ಷಕರುಗಳಾದ ಲಕ್ಷ್ಮೀನಾರಾಯಣ ,ಜಿತೇಶ್ ವಿ ,ಸಿಬ್ಬಂದಿಗಳಾದ ಪ್ರವೀಣ್ ಕಲ್ಮಲೆ ,ಭಾಸ್ಕರ ಡಿ ,ಜಯರಾಮ್ ಕಾರ್ಯಾಚರಣೆ ತಂಡದಲ್ಲಿದ್ದರು .ಮುಂದಿನ ತನಿಖೆಯನ್ನು ಎ. ಸಿ .ಎಫ್ ಸುಬ್ರಮಣ್ಯ ರಾವ್ ಹಾಗು ಡಿ. ಸಿ. ಎಫ್ ಡಾ ಕರಿಕಾಲನ್ ರವರ ಮಾರ್ಗದರ್ಶನದಲ್ಲಿ ನಡೆಯಲಿದೆ. ಕಾರ್ಯಾಚರಣೆ ವೇಳೆ ಪುತ್ತೂರು ವಲಯ ಅರಣ್ಯಾಧಿಕಾರಿಗಳು ಹಾಗು ಸಿಬ್ಬಂದಿ ಸಹಕರಿಸಿರುತ್ತಾರೆ.